Monday 10 October 2011

ಮತ್ತೆ ಬಂದ ಡಬ್ಬಿಂಗ್ ಭೂತ ಕನ್ನಡ ಚಿತ್ರರಂಗ ಗೋತಾ?

ಕನ್ನಡ
ಚಿತ್ರರಂಗದ ತಲೆಬಾಗಿಲಿನಲ್ಲಿ ಮತ್ತೊಮ್ಮೆ ಡಬ್ಬಿಂಗ್ ಭೂತ ಬಾಯ್ತೆರೆದು ನಿಂತಿದೆ. ಆದರೆ ಭಾರಿ ಅದು ಕಿರುತೆರೆಯ ದಾರಿಯಲ್ಲಿ ಹಿರಿತೆರೆ ಪ್ರವೇಶಿಸುವುದು ನಿಚಳವಾಗಿದೆ. ಡಬ್ಬಿಂಗ್ ವಿವಾದದ ಬಗ್ಗೆ ಚರ್ಚೆಗಳೇ ಆಗದಂತೆ ತಡೆಯುವ, ಚಿತ್ರರಂಗದ ಪ್ರಮುಖರನ್ನೇ ಬೆದರಿಸಿ ಡಬ್ಬಿಂಗ್ ಪರ ಒಳಲಾಬಿ ನಡೆಸುವ ಶಕ್ತಿಗಳು ವಾಣಿಜ್ಯ ಮಂಡಳಿಯ ಕೈ ಕಟ್ಟಿಹಾಕಿ ಮಂಡಳಿಯಿಂದ ಸ್ಪಷ್ಟ ನಿರ್ಧಾರ ಹೊರಬೀಳದ ಸನ್ನಿವೇಶ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಭಾರಿ ಡಬ್ಬಿಂಗ್ ವಿವಾದದ ಬಗ್ಗೆ ಕಿರುತೆರೆಯಲ್ಲಿ ಪ್ರಸಾರವಾದ ಹಿಂದಿ ಧಾರಾವಾಹಿಯೊಂದರ ಮೂಲಕ ಚರ್ಚೆಗಳು ಮತ್ತೆ ಚಾಲನೆ ಪಡೆದುಕೊಂಡಿವೆ. ಡಬ್ಬಿಂಗ್ ಪರ ಶಕ್ತಿಗಳ ಮೌನದ ನಡುವೆಯೂ ವಿವಾದ ಚರ್ಚೆಗಳ ರೂಪದಲ್ಲಿ ಮತ್ತೇ ಪ್ರತ್ಯಕ್ಷವಾಗಿದೆ. ಹಿರಿತೆರೆಯಲ್ಲಿ ವಿವಾದದ ಬಗ್ಗೆ ಹಗ್ಗ-ಜಗ್ಗಾಟ ನಡೆಯುತ್ತಿರುವಾಗಲೇ ಕಿರುತೆರೆಯ ಮಂದಿಯಾಗಲೇ ಡಬ್ಬಿಂಗ್ ವಿರುದ್ದ ಸಮರ ಸಾರಿದ್ದಾರೆ, ಡಬ್ಬಿಂಗ್ ಸಂಸ್ಕೃತಿಯ ಬಗ್ಗೆ ಚರ್ಚೆಗಳು ಆರಂಭವಾಗಲು ನಾಂದಿಯಾಡಿದ್ದಾರೆ. ಡಬ್ಬಿಂಗ್ ಬಗ್ಗೆ ದಿಟ್ಟ ನಿರ್ಧಾರವೊಂದನ್ನು ಕೈಗೊಳ್ಳುವ ನಿಟ್ಟಿನತ್ತ ಚರ್ಚೆಗಳು ವಾದ-ವಿವಾದಗಳು ಸಾಗಿದ್ಧಾರೆ ಒಪ್ಪಬಹುದಿತ್ತು ಆದರೆ, ಭಾರೀಯೂ ಡಬ್ಬಿಂಗ್ ಭೂತ ಸೃಷ್ಟಿಸಿರುವುದು ಪರ ವಿರೋಧದ ಕೆಸರೆರೆಚಾಟವನ್ನೇ ಹೊರತು ಡಬ್ಬಿಂಗ್ ಎನ್ನುವುದು ನಿಜಕ್ಕೂ ಬೇಕೆ, ಬೇಡವೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವತ್ತ ಸಾಗುವ ಲಕ್ಷಣಗಳಂತೂ ಕಾಣಿಸುತ್ತಿಲ್ಲ. ಭಾರೀ ಡಬ್ಬಿಂಗ್ ಬಗ್ಗೆ ವಿವಾದ ಭುಗಿಲೇಳಲು ಕಾರಣ ಕಿರುತೆರೆಗೂ ನುಸುಳುತ್ತಿರುವ ಡಬ್ಬಿಂಗ್ ಸಂಸ್ಕೃತಿ. ಸ್ವಾತಂತ್ರ್ಯ ದಿನದಂದು ಕನ್ನಡದ ಕಿರುತೆರೆ ವಾಹಿನಿಯೊಂದು ಝಾನ್ಸಿರಾಣಿ ಲಕ್ಷ್ಮಿಬಾಯಿಕುರಿತಾದ ಕಾರ್ಯಕ್ರಮ ಪ್ರಸಾರ ಮಾಡಿದ್ದೆ ಕನ್ನಡದ ಚಿತ್ರೋದ್ಯಮದಲ್ಲಿ ಮತ್ತೆ ವಿವಾದ ಕಾಣಿಸಿಕೊಳ್ಳಲು ನೆಪವಾಗಿದೆ. ಅವತ್ತು, ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ ೧೫ರಂದು ಅತ್ತ ಝೀ ವಾಹಿನಿಯಲ್ಲಿ ಹಿಂದಿ ಧಾರಾವಾಹಿ ಅದೇ ಬಾಷೆಯಲ್ಲಿ ಯಥಾವತ್ತಾಗಿ ಆರಂಭವಾಗುತ್ತಿದ್ದಂತೆಯೇ ಇತ್ತ ಕಿರುತೆರೆಯ ಕಲಾವಿದರು ಕನಲಿ ಹೋದರು. ಎಂ.ಜಿ.ರಸ್ತೆಯ ವಾಹಿನಿಯ ಕಚೇರಿಗೆ ನುಗ್ಗಿದ್ದೇ ಪೀಠೋಪಕರಣ, ಕಂಪ್ಯೂಟರ್ಗಳನ್ನು ಪುಡಿಪುಡಿ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿಬಿಟ್ಟರು. ಮೂಲಕ ಮತ್ತೊಮ್ಮೆ ಡಬ್ಬಿಂಗ್ ಭೂತದ ಬಗ್ಗೆ ಚರ್ಚೆಗಳು ಆರಂಭವಾದಂತಾಯಿತು. ನಿಜಕ್ಕೂ ಚಿತ್ರರಂಗದ ಹಿರಿಯರು ವಿವಾದದ ಅಂತ್ಯವನ್ನು ಬಯಸಿದ್ದರೆ, ಯಾವತ್ತೋ ಡಬ್ಬಿಂಗ್ ವಿವಾದ ಬಗೆಹರಿದು ಹೋಗುತ್ತಿತ್ತು. ಆದರೆ, ಉದ್ಯಮದಲ್ಲಿ ತಮಗೆ ಸಂಕಷ್ಟ ಬಂದಾಗ ಮಾತ್ರ ಬೊಬ್ಬಿರಿಯುವ ಮಂದಿ ಬೇರೆಯವರು ಕಷ್ಟಕ್ಕೆ ಸಿಕ್ಕಾಗ ಮಾತ್ರ ಸಮಸ್ಯೆಯಲ್ಲೂ ತಮಗೆ ಲಾಭವಾಗುವ ಅಂಶಗಳ್ಯಾವುವು ಎಂಬ ಬಗ್ಗೆಯೇ ಗಮನ ಹರಿಸುವುದಿರಿಂದ ಡಬ್ಬಿಂಗ್ ಸಂಸ್ಕೃತಿಯ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅಷ್ಟೇ ವೇಗವಾಗಿ ತಣ್ಣಗೂ ಆಗುತ್ತವೆ. ಗಾಂಧಿನಗರ ಕೆಲ ನಿರ್ಮಾಪಕರು ಡಬ್ಬಿಂಗ್ನಿಂದ ತಮಗೆ ಲಾಭ ಬರುವುದು ಖಚಿತವಾದರೆ, ಅಣ್ಣಮ್ಮನ ಮೇಲೆ ಆಣೆಯಿಟ್ಟು ಡಬ್ಬಿಂಗ್ ಅಲ್ಲ ಎಂದು ಕನ್ನಡಿಗರ ಕಿವಿ ಮೇಲೆ ಹೂ ಇಡಲು ಸಿದ್ದರಾಗಿಬಿಡುತ್ತಾರೆ. ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಂತೂ ಡಬ್ಬಿಂಗ್ ಬಗ್ಗೆ ಜೋರಾಗಿ ಉಸಿರೆತ್ತಲೂ ಹಿಂಜರಿಯುತ್ತದೆ. ಡಬ್ಬಿಂಗ್ ಪರವಾಗಿ ಬ್ಯಾಟಿಂಗ್ ನಡೆಸುವ ನಿರ್ಮಾಪಕರ ಲಾಬಿಯೂ ಪ್ರಬಲವಾಗಿರುವು ದರಿಂದಲೇ ವಾಣಿಜ್ಯ ಮಂಡಳಿ ಡಬ್ಬಿಂಗ್ ಬಗ್ಗೆ ಚರ್ಚೆ ಮಾಡಲು ಹಿಂಜರಿಯುತ್ತದೆ. ಕೆಲ ಭಾರಿ ಡಬ್ಬಿಂಗ್ ವಿರೋಧಿಸಿ ಪ್ರತಿಭಟನೆಗಳು ನಡೆದಿವೆಯಾದರೂ ಅವು ನೆಪಮಾತ್ರಕಷ್ಟೇ. ಇನ್ನು ಚಿತ್ರರಂಗದ ಹಿರಿಯ ಅಭಿಪ್ರಾಯಗಳೇನು ಎಂಬುದನ್ನು ಗಮನಿಸಲು ಹೋದರೆ, ಕೆಲವರು ವಿಷಯದಲ್ಲಿ ಕೆಚ್ಚೆದೆಯ ನಿಲುವುಗಳನ್ನು ವ್ಯಕ್ತಪಡಿಸುತ್ತಾರಾದರೂ, ಡಬ್ಬಿಂಗ್ ಪರ ಮಾತನಾಡುವವರ ಸಂಖ್ಯೆ ಏನೂ ಕಡಿಮೆಯಿಲ್ಲ. ಕಿರುತೆರೆಯ ಕಲಾವಿದರು ಮೊನ್ನೆ ನಡೆಸಿದ ದಾಂಧಲೆಯ ಬಗೆಯಂತೂ ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಸಂಪರ್ಕ ತಾಣಗಳಲ್ಲಿಯೂ ಭರ್ಜರಿ ಚರ್ಚೆಯಾಗುತ್ತಿದೆ. ಚರ್ಚೆಗೂ ಕೂಡ ಡಬ್ಬಿಂಗ್ ಪರ ಲೇಪನವಿರುವುದರಿಂದ ಅದನ್ನೂ ಕೂಡ ಡಬ್ಬಣ್ಣರ ಕುಯುಕ್ತಿ ಎನ್ನುವವರೂ ಇದ್ದಾರೆ.ಕನ್ನಡ ಚಿತ್ರರಂಗದವರು ಡಬ್ಬಿಂಗ್ ಸಂಸ್ಕೃತಿಯನ್ನು ವಿರೋಧಿಸುತ್ತಾರೆ. ಮನೋರಂಜನೆ ಕನ್ನಡಕ್ಕೆ ಡಬ್ ಆಗಬಾರದೆಂಬ ವಾದದಲ್ಲಿ ಕನ್ನಡ ಉಳಿಸುವ ಇರಾದೆ ಇದ್ದರೆ ಯಾರದೂ ತರಕಾರು ಇರುತ್ತಿರಲಿಲ್ಲ. ಆದರೆ, ಇದರಲ್ಲಡಗಿರುವುದು ಸ್ವಹಿತಾಸಕ್ತಿ ಎಂಬ ಮಾತು ಒಂದೆಡೆ ಕೇಳಿ ಬಂದರೆ, ಇನ್ನೊಂದು ಕಡೆ ಡಬ್ಬಿಂಗ್ ನಮ್ಮ ಸೃಜನಶೀಲತೆಯನ್ನೇ ಕೊಂದು ಎಂಜಲು ಸಂಸ್ಕೃತಿಯತ್ತ ಸಾಗಲು ಹಾದಿಯಾಗುತ್ತದೆ ಎನ್ನುವವರು ಇದ್ದಾರೆ. ಡಬ್ಬಿಂಗ್ ಬಗ್ಗೆ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗಾಭರಣ ಹೇಳಿರುವ ಮಾತುಗಳನ್ನು ಪ್ರಸ್ತಾಪಿಸಿ ನೋಡಿದರೆ, ನಾಡು-ನುಡಿ ಕನ್ನಡ ಚಿತ್ರೋದ್ಯಮದ ರಕ್ಷಣೆಗೆ ಡಬ್ಬಿಂಗ್ ವಿರೋಧಿ ನಿಲುವು ತಾಳಬೇಕಾದ ಅನಿವಾರ್ಯತೆ ಅರ್ಥವಾಗುತ್ತದೆ. ರಿಮೇಕ್ ಹೊಡೆತವನ್ನೇ ತಡೆದುಕೊಳ್ಳಲಾಗದೆ ನಿತ್ರಾಣವಾಗುವ ನಮ್ಮ ಚಿತ್ರ ಸಂಸ್ಕೃತಿ ಇನ್ನು ಡಬ್ಬಿಂಗ್ ಹೊಡೆತವನ್ನು ತಡೆದುಕೊಳ್ಳುತ್ತದೆಯೇ ಎಂದು ಅವರು ಎತ್ತಿದ ಪ್ರಶ್ನೆಯೂ ಸಮಂಜಸವಾಗಿಯೇ ಇದೆ.ಡಬ್ಬಿಂಗ್ ಪರವಾಗಿ ಮಾತನಾಡುವವರು ಹಾಲಿವುಡ್, ಬಾಲಿವುಡ್, ನೆರೆರಾಜ್ಯಗಳ ಚಿತ್ರರಂಗಗಳನ್ನು ಉದಾಹರಣೆಯಾಗಿ ಕೊಡುತ್ತಾರಾದರೂ, ಕನ್ನಡದ ಭಾಷೆಯ ಚಿತ್ರಗಳಿಗಿರುವ ಮಾರುಕಟ್ಟೆಯ ಬಗ್ಗೆ ಯಾರು ಚಕಾರವೆತ್ತುವುದಿಲ್ಲ.ಪುಟ್ಟ ಮಾರುಕಟ್ಟೆಯಲ್ಲಿ ಆರ್ಥಿಕ ಸ್ಥಿರತೆ ಇಲ್ಲದೆ ಕನ್ನಡ ಚಿತ್ರಗಳು ತತ್ತರಿಸುತ್ತಿರುವಾಗ ಡಬ್ಬಿಂಗ್ ಸಂಸ್ಕೃತಿ ಪ್ರವೇಶವಾದರೆ, ಕನ್ನಡ ಚಲನಚಿತ್ರ ರಂಗ ಹಾಗೂ ಮಾರುಕಟ್ಟೆಯನ್ನೇ ಅದು ತನ್ನ ಕಬಂಧಬಾಹುಗಳಲ್ಲಿ ಬಂಧಿಸಿಬಿಡುವುದರಲ್ಲಿ ಯಾವ ಸಂಶಯವೂ ಇಲ್ಲ. ಇನ್ನೂ ರಾಜ್ ಪುತ್ರ ಶಿವಣ್ಣ ಕೂಡ ಡಬ್ಬಿಂಗ್ ಬಗ್ಗೆ ದಿಟ್ಟವಾದ ಮಾತುಗಳನ್ನೇ ಹಾಡಿದ್ದಾರೆ.’ಸೆಟಲೈಟ್ ರೈಟ್ನಿಂದ ದುಡ್ಡು ಬರುತ್ತೇ ಅನ್ನೊ ಕಾರಣಕ್ಕೆ ಕೆಲಸ ಮಾಡಬೇಡಿ, ದುಡ್ಡು ಸಂಪಾದಿಸಬೇಕೆಂದರೆ ನಿಯತ್ತಾಗಿರಬೇಕು, ಆಗ ದುಡಿದ ದುಡ್ಡು ಸಹ ಅರಗುತ್ತೆಇದನ್ನು ನಾನು ಕನ್ನಡಿಗರ ಪರವಾಗಿ ಹೇಳುತ್ತಿದ್ದೇನೆ ಎಂದಿರುವ ಅವರ ಮಾತು ತಗುಲಬೇಕಾದ ಜಾಗಕ್ಕೆ ಸರಿಯಾಗಿ ತಾಗಿದೆ. ಅವರ ಮಾತಿನ ಏಟಿಗೆ ಡಬ್ಬಿಂಗ್ ಪರವಾಗಿರುವವರು ಒಳಗೊಳಗೆ ಮಚ್ಚು ಮಸೆಯುತ್ತಿದ್ದರಾದರೂ ಡಬ್ಬಿಂಗ್ ಪರ ಬಹಿರಂಗವಾದಕ್ಕಿಳಿದರೆ, ಜನ ಕ್ಯಾಕರಿಸಿಯಾರೂ ಎಂಬ ಭಯವೂ ಅವರಿಗೆ ಇದ್ದಂತಿದೆ. ರಿಮೇಕ್ ಹಾಗೂ ಡಬ್ಬಿಂಗ್ ಪರ ಬ್ಯಾಟ್ ಬೀಸುವ ಮಂದಿ ಕೇವಲ ತಮ್ಮ ತಿಜೋರಿ ತುಂಬಿಸಿಕೊಳ್ಳುವ ಸಲುವಾಗಿಯೇ ಡಬ್ಬಿಂಗ್ ಬಗ್ಗೆ ಚರ್ಚೆಯಾಗದಂತೆ ನೋಡಿಕೊಳ್ಳುತ್ತಾರೆಂಬುದು ಎಲ್ಲರಿಗೂ ಅರ್ಥವಾಗಿರುವುದರಿಂದ ಹೋರಾಟ ಆರಂಭಿಸಲು ಇದು ಸುಸಮಯ ಎಂದೇ ಹೇಳಬಹುದು.
ನಮ್ಮ
ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಲು ಡಬ್ಬಿಂಗ್ ವಿರೋಧಿ ನಿಲುವು ತಳೆಯುವುದು ಅನಿವಾರ್ಯವೂ ಆಗಿರುವುದರಿಂದ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಕೊಂಚ ಧೈರ್ಯ ಪ್ರದರ್ಶಿಸಿ ವಿವಾದಕ್ಕೊಂದು ಅಂತ್ಯ ಹಾಡುವುದು ಕೂಡ ಅನಿವಾರ್ಯವಾಗಿದೆ. ಹಿಂದೆ ಭಾರತ್ ೨೦೦೦ ಎಂಬ ತೆಲುಗಿನಲ್ಲಿ ತಯಾರಾದ ರಾಮೋಜಿ ರಾವ್ ನಿರ್ಮಿಸಿದ ಚಿತ್ರ ಡಬ್ಬಿಂಗ್ ಆಗಿ ಕನ್ನಡದಲ್ಲಿ ಬಿಡುಗಡೆಯಾದಾಗ, ಅದರ ವಿರುದ್ದ ದೊಡ್ಡ ರಣ-ರಂಪಾಟವೇ ಆಗಿತ್ತು. ಅವತ್ತು ಎಚ್ಚೆತ್ತುಕೊಂಡಿದ್ದ ಚಿತ್ರರಂಗದ ಪ್ರಮುಖರು, ಕಾರ್ಮಿಕರು, ತಂತ್ರಜ್ಞರ ಒಕ್ಕೂಟ ಡಬ್ಬಿಂಗ್ ಲಾಬಿಯ ವಿರುದ್ದ ದೊಡ್ಡದಾಗಿ ಧ್ವನಿ ಎತ್ತಿ ನಿಂತಿತ್ತು. ಯಾವಾಗ ವಿವಾದವಾಯಿತೋ ಡಬ್ಬಿಂಗ್ ಗಂಡು ಮೂಡೆ ಕಟ್ಟಿತ್ತು. ಈಗ ಮತ್ತೇ ಧುತ್ತನೇ ಪ್ರತ್ಯಕ್ಷವಾಗಿದೆ. ಕನ್ನಡ ಕಿರುತೆರೆಯಲ್ಲಿ ಕೋಲಾಹಲವೆಬ್ಬಿಸುವ ಮೂಲಕ ಹಿರಿತೆರೆಯನ್ನು ಅಣಕಿಸುತ್ತಿದೆ. ವಾಣಿಜ್ಯ ಮಂಡಳಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದೇ?

1 comment: